ಈ ಚುನಾವಣೆ ಸೈದ್ಧಾಂತಿಕ ಚುನಾವಣೆ. ಈ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಹೋರಾಡಲು ಕನ್ನಡವೂ ಇರುವುದಿಲ್ಲ, ಕರ್ನಾಟಕವೂ ಇರುವುದಿಲ್ಲ.

ಈ ಚುನಾವಣೆ ಸೈದ್ಧಾಂತಿಕ ಚುನಾವಣೆ. ಈ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಹೋರಾಡಲು ಕನ್ನಡವೂ ಇರುವುದಿಲ್ಲ, ಕರ್ನಾಟಕವೂ ಇರುವುದಿಲ್ಲ.


ಪ್ರಜಾತಂತ್ರ ವ್ಯವಸ್ಥೆಯಲ್ಲೇ ನಂಬಿಕೆ ಇಲ್ಲದ, ಭಾಷಾವಾರು ಪ್ರಾಂತ್ಯಗಳ ಬಗ್ಗೆ ನಂಬಿಕೆ ಇಲ್ಲದ, ಹಿಂದಿ ಹಾಗು ಸಂಸ್ಕೃತದ ಮೇಲರಿಮೆ ಕನ್ನಡವೆಂದರೆ ಕೀಳು ಎಂಬ ಮೌಢ್ಯ ತುಂಬಿರುವ ಒಂದು ಸಿದ್ಧಾಂತವಿರುವ ಪಕ್ಷಕ್ಕೆ ಮತ್ತೊಮ್ಮೆ ಬಹುಮತ ಬಂದರೆ ಮುಗಿಯಿತು. ಇವತ್ತಿನ ಸ್ವರೂಪದ ಕರ್ನಾಟಕವೂ ಇರುವುದಿಲ್ಲ, ಕನ್ನಡವಂತೂ ಅಡುಗೆ ಮನೆ ಭಾಷೆಯಾಗಿ ಹಿಂದಿ ಸಂಸ್ಕೃತಗಳ ಅಡಿಯಾಳಾಗಿ ಉಳಿಯುವುದು ಖಂಡಿತ. ಅದಕ್ಕೆ ಈ ಚುನಾವಣೆಯ ಸಂದರ್ಭದಲ್ಲಿ ನಾನು ಬಹಳ ಸ್ಪಷ್ಟವಾಗಿ ರಾಜಕೀಯ ನಿಲುವುಗಳನ್ನ ವ್ಯಕ್ತಪಡಿಸುತ್ತಿರುವುದು.

ನಮ್ಮ ಮೆಟ್ರೋ ಹಿಂದಿ ಬೇಡ ಹೋರಾಟದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವದ ಅವಶ್ಯಕತೆಯನ್ನೇ ಪ್ರಶ್ನೆ ಮಾಡಿದ ವ್ಯಕ್ತಿ ತೇಜಸ್ವಿ ಸೂರ್ಯ. ಕನ್ನಡದಷ್ಟೇ ಸ್ಥಾನ ಹಿಂದಿಗೂ ಕೊಡಿ ಬೆಂಗಳೂರಿನಲ್ಲಿ ಎಂದು ಪ್ರತಿಪಾದನೆ ಮಾಡಿದ ವ್ಯಕ್ತಿ ಇವನು. ಕನ್ನಡಕ್ಕೆ ಕನ್ನಡಿಗರಿಗೆ ಇದರಿಂದಾಗುವ ತೊಂದರೆಗಳ ಬಗ್ಗೆ ಅರಿವು ಇಲ್ಲದವ ನಿಮ್ಮ ಬಾಗಿಲಿಗೆ ವೋಟ್ ಕೇಳಲು ಬರಲಿದ್ದಾನೆ. ಬಿಡಬೇಡಿ ಪ್ರಶ್ನೆ ಮಾಡಿ.



ನಾನು ಕನ್ನಡಿಗ ಹಾಗಾಗಿ ಭಾರತೀಯ, ಕರ್ನಾಟಕದಿಂದ ಭಾರತ ಎಂದು ನಂಬಿರುವ ಲಕ್ಷಾಂತರ ಕನ್ನಡಿಗರ ಆಶಯ ಕನ್ನಡ ಬಾವುಟವಾಗಿತ್ತು. ಕನ್ನಡಿಗರ ಕನ್ನಡದ ಐಡೆಂಟಿಟಿ ಬಗ್ಗೆಯೇ ಪ್ರಶ್ನೆ ಮಾಡಿದ ಸಂಘ ಪರಿವಾರದ ತಂಡದ ಒಬ್ಬ ಪ್ರಮುಖ ವ್ಯಕ್ತಿ ತೇಜಸ್ವಿ ಸೂರ್ಯ. ಈಗ ನಿಮ್ಮ ಬಾಗಿಲಿಗೆ ವೋಟ್ ಕೇಳಲು ಬರಲಿದ್ದಾನೆ. ಬಿಡಬೇಡಿ ಈ ವಿಷಯದ ಬಗ್ಗೆ ಪ್ರಶ್ನೆ ಮಾಡಿ.

-ಗಣೇಶ್ ಚೇತನ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States